ಭಾನುವಾರ, ಮೇ 17, 2015

ನ್ಯಾನೋ ಕಥೆಗಳು

1. ಕಡಿಯಿರಿ, ಕೊಲ್ಲಿರಿ, ಎಂದೆಲ್ಲಾ ಉತ್ತೇಜಿಸಿದ ನಾಯಕನ ಮಾತು ಪಾಲಿಸಲು ಧರ್ಮ ರ(ಭ)ಕ್ಷಕ ಹೊರಟ. ಬೇಟೆಗಾರನ ಕೋವಿಗೆ ಸಿಕ್ಕ ಪಕ್ಷಿಯಂತೆ ಕೆಲ ಜೀವಗಳು ಧರೆಗುರಿಳಿದವು. ರಕ್ಷಕ ಸೆರೆಮನೆ ಸೇರಿದ. ನಾಯಕ ಮತ್ತೊಂದು ವೇದಿಕೆ ಹತ್ತಿದ ಮತ್ತದೇ ರಾಗ ಹಾಡಲು.


2. ನೀರ ಮೇಲಿನ ಗುಳ್ಳೆಯಂತಿರೋ ಬದುಕಿನಲಿ ಮನುಷ್ಯ ಯಾವುದಕ್ಕೂ ಆಸೆ ಪಡಬಾರದು ಅಂತೆಲ್ಲಾ ಬೋಧಿಸಿದ ಬೋಧಕನ ಚಿಂತೆಯೆಲ್ಲವೂ ತನ್ನ ಮನೆಯ ಎರಡನೆಯ ಮಹಡಿಯನ್ನು ಪೂರ್ಣಗೊಳಿಸುವುದರತ್ತಲೇ ನೆಟ್ಟಿತ್ತು.


3. ಕಟ್ಟಿಕೊಂಡವಳ ಮಾತು ಕೇಳಿ ಹೆತ್ತವಳನ್ನೇ ವೃದ್ಧಾಶ್ರಮಕ್ಕೆ ಸೇರಿಸಲು ಹೊರಟ ಮಗ. ಅವನ ಕಾರಿನ ಹಿಂದಿನ "ಮುತ್ತು ಕೊಡೋಳು ಬಂದಾಗ ತುತ್ತು ಕೊಟ್ಟೋಳ ಮರೆಯದಿರು" ಎಂಬ ಬರಹ ಯಾಕೋ ವ್ಯಂಗ್ಯವಾಗಿ ನಗುತ್ತಿತ್ತು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ